ತಿಪ್ಪೂರು ಎಂಪಿಸಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಗೆಲುವು.....

 ತಿಪ್ಪೂರು ಎಂಪಿಸಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಗೆಲುವು...



ದೊಡ್ಡಬಳ್ಳಾಪುರ:ತಾಲ್ಲೂಕಿನ ತಿಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.


ಇದನ್ನೂ ಓದಿ:    JOB; ಇಂಧನ ಇಲಾಖೆಯ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ .....!


ಚುನಾವಣೆ ಅಧಿಕಾರಿ ಭಾಸ್ಕರ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಅಭ್ಯರ್ಥಿಗಳಾದ ಸುಧಾಕರ್, ಟಿ.ಆರ್.ಆನಂದ್, ಅಶೋಕ್, ಎನ್.ಹರೀಶ್, ಟಿ.ಎಂ.ರವಿಕುಮಾರ್, ಕೃಷ್ಣಮೂರ್ತಿ, ಸುಮಿತ್ರಾ, ಜಯಮ್ಮ, ಅನಸೂಯಮ್ಮಾ, ಶಾಂತಮ್ಮ, ಗಂಗಾಧರ, ಎಂ.ಕುಮಾರ,ಪಿ.ರಾಜಣ್ಣ ಆಯ್ಕೆಯಾಗಿದ್ದಾರೆ.


ನೂತನ ನಿರ್ದೇಶಕರನ್ನು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೆಗೌಡ, ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ ಅಭಿನಂದಿಸಿದ್ದಾರೆ.

Comments