LPG ಗ್ರಾಹಕರಿಗೆ ಹೊಸ ಟೆನ್ಷನ್; ಈ ರೂಲ್ಸ್ ಫಾಲೋ ಮಾಡದಿದ್ರೆ ಸಿಗಲ್ಲ ಸಿಲಿಂಡರ್; ಕೇಂದ್ರದ ಮಹತ್ವದ ಘೋಷಣೆ...

 LPG ಗ್ರಾಹಕರಿಗೆ ಹೊಸ ಟೆನ್ಷನ್; ಈ ರೂಲ್ಸ್ ಫಾಲೋ ಮಾಡದಿದ್ರೆ ಸಿಗಲ್ಲ ಸಿಲಿಂಡರ್; ಕೇಂದ್ರದ ಮಹತ್ವದ ಘೋಷಣೆ..

                                ( ಸಾಂದರ್ಭಿಕ ಚಿತ್ರ )

ಎಲ್ಪಿಜಿ ಸಿಲಿಂಡರ್ ಅಭಾವದ ನಡುವೆಯೇ ಗ್ರಾಹಕರಿಗೆ ಹೊಸ ಹೊಸ ಟೆನ್ಷನ್ ಶುರುವಾಗಿದೆ. ಹೊಸ ಕೆವೈಸಿ ಬಯೋಮೆಟ್ರಿಕ್-ಆಧಾರ್ ಪರಿಶೀಲನೆ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.


ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧದಿಂದಾಗಿ, ಭಾರತ ಸೇರಿದಂತೆ ವಿಶ್ವದ ಕೆಲವು ದೇಶಗಳು ಇಂಧನ ಕೊರತೆಯನ್ನು ಎದುರಿಸುತ್ತಿವೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲದಿದ್ದರೂ, ಅಡುಗೆ ಅನಿಲ ಸಿಲಿಂಡರ್‌ ಗಳ ಕೊರತೆ ಇದೆ.




ಈ ಪರಿಸ್ಥಿತಿಯಲ್ಲಿ ಗ್ರಾಹಕರು ಬಯೋಮೆಟ್ರಿಕ್-ಆಧಾರ್ ಪರಿಶೀಲನೆಗೆ ಒಳಗಾಗಬೇಕು ಎಂದು ಕೇಂದ್ರ ಸರ್ಕಾರ ಮಾಡಿದ ಘೋಷಣೆ ಗ್ರಾಹಕರಿಗೆ ಟೆನ್ಷನ್ ಹೆಚ್ಚಿಸಿದೆ. ಈ ನಿಯಮ ಪಾಲಿಸದಿದ್ರೆ ಸಿಲಿಂಡರ್‌ ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬ ಭಯ ಗ್ರಾಹಕರಲ್ಲಿ ಹೆಚ್ಚಿದೆ ಎಂದು ವರದಿಯಾಗಿದೆ.


ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಬಯೋಮೆಟ್ರಿಕ್- ಆಧಾರ್ ಪರಿಶೀಲನೆಗೆ ಸಂಬಂಧಿಸಿದಂತೆ ವಿವರಣೆಯನ್ನು ನೀಡಿದೆ. ಆ ವಿವರಣೆಯಲ್ಲಿ, ಪ್ರತಿಯೊಬ್ಬರೂ ಬಯೋಮೆಟ್ರಿಕ್-ಆಧಾರ್ ಪರಿಶೀಲನೆಗೆ ಒಳಗಾಗಬೇಕು ಎಂದು ತಿಳಿಸಿದೆ.


ಎಲ್ಲಾ ದೇಶೀಯ ಎಲ್‌ಪಿಜಿ ಗ್ರಾಹಕರು ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವುದನ್ನು ಮುಂದುವರಿಸಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು ಎಂದು ಘೋಷಿಸಿತು. ಆಧಾರ್ ಫೇಸ್‌ ಆರ್‌ಡಿ ಅಪ್ಲಿಕೇಶನ್ ಜೊತೆಗೆ ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ಗ ಳ ಮೂಲಕ ಸ್ಮಾರ್ಟ್‌ ಫೋನ್ ಬಳಸಿ ಮನೆಯಿಂದಲೇ ಪರಿಶೀಲನೆ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ಸಚಿವಾಲಯ ಹೇಳಿದೆ.



ಕೇಂದ್ರ ಸರ್ಕಾರ ಹೊರಡಿಸಿರುವ ಸ್ಪಷ್ಟೀಕರಣದಲ್ಲಿ ಬಯೋಮೆಟ್ರಿಕ್-ಆಧಾರ್ ಪರಿಶೀಲನೆಯು ನಿಯಮಿತ ಅಧಿಸೂಚನೆಯಾಗಿದೆ ಎಂದು ಹೇಳಲಾಗಿದೆ. ಇದೀಗ ಹೊರಡಿಸಲಾದ ಅಧಿಸೂಚನೆಯು ಎಲ್ಲಾ ಗ್ರಾಹಕರಿಗೆ ಕಡ್ಡಾಯವಲ್ಲ.



ಬಯೋಮೆಟ್ರಿಕ್-ಆಧಾರ್ ಪರಿಶೀಲನೆಯನ್ನು ಇನ್ನೂ ಮಾಡದ ಗ್ರಾಹಕರಿಗೆ ಮಾತ್ರ ಇದು ಕಡ್ಡಾಯವಾಗಿದೆ. ಈಗಾಗಲೇ ಇದನ್ನು ಮಾಡಿಸಿಕೊಂಡವರು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.



ಹೊಸ ನಿರ್ದೇಶನದ ಅಡಿಯಲ್ಲಿ, LPG ಬಳಕೆದಾರರು ತಮ್ಮ ಆಧಾರ್ ಅನ್ನು ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಲಿಂಕ್ ಮಾಡಬೇಕು ಮತ್ತು ದೃಢೀಕರಿಸಬೇಕು. ಈ ಪ್ರಕ್ರಿಯೆಯು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಸಾರ್ವಜನಿಕ ವಲಯದ ತೈಲ ಕಂಪನಿಗಳು ಒದಗಿಸುವ LPG ಸಂಪರ್ಕಗಳ ಗ್ರಾಹಕರಿಗೆ ಅನ್ವಯಿಸುತ್ತದೆ.



ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಈಗ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸುಮಾರು 300,000 ಮೆಟ್ರಿಕ್ ಟನ್ ಎಲ್‌ಪಿಜಿ ಸಿಲುಕಿಕೊಂಡಿದ್ದು, ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಕಳವಳವನ್ನುಂಟುಮಾಡಿದೆ. ಅಧಿಕಾರಿಗಳ ಪ್ರಕಾರ, ಈ ಪರಿಸ್ಥಿತಿಯು ಮುಂಬರುವ ದಿನಗಳಲ್ಲಿ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗ್ತಿದೆ.



ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ, ಇದು ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಈ ಮಾರ್ಗಕ್ಕೆ ಯಾವುದೇ ಅಡಚಣೆ ಉಂಟಾದರೆ ಅದು ಜಾಗತಿಕ ಇಂಧನ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇರಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳು ಈ ಪ್ರದೇಶದಲ್ಲಿನ ಸಾಗಣೆಯ ಮೇಲೆ ಪರಿಣಾಮ ಬೀರುತ್ತಿವೆ.

Comments