ಬಾವಿಯಲ್ಲಿ ಈಜಾಡಲು‌ ಹೋದ ಬಾಲಕ ಸಾವು|ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಅಗ್ನಿಶಾಮಕ‌ ಸಿಬ್ಬಂದಿಯಿಂದ ಮೃತದೇಹವನ್ನ ಹೊರತೆಗೆದಯಲಾಗಿದೆ...

 ಬಾವಿಯಲ್ಲಿ ಈಜಾಡಲು‌ ಹೋದ ಬಾಲಕ ಸಾವು|ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಅಗ್ನಿಶಾಮಕ‌ ಸಿಬ್ಬಂದಿಯಿಂದ ಮೃತದೇಹವನ್ನ ಹೊರತೆಗೆದಯಲಾಗಿದೆ...


ದೇವನಹಳ್ಳಿ : ಬಾವಿಯಲ್ಲಿ‌ ಈಜಾಡಲು ಹೋದ ಬಾಲಕ ಈಜು ಬಾರದೆ ನೀರಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ಇಂದು ದೇವನಹಳ್ಳಿ ತಾಲೂಕಿನ ಚೌಡನಹಳ್ಳಿಯ ಬಳಿ ನಡೆದಿದೆ.


ದೊಡ್ಡಬಳ್ಳಾಪುರ ನಗರದ ಮುತ್ತೂರು ನಿವಾಸಿ ಗಗನ್(15), ಮೃತ ದುರ್ದೈವಿ ಯಾಗಿದು.ತನ್ನ ಮೂವರು ಸ್ನೇಹಿತರ ಜೊತೆಯಲ್ಲಿ ಇಂದು ಮಧ್ಯಾಹ್ನ ಬಾವಿಯಲ್ಲಿ ಈಜಾಡಲು ಹೋಗಿ, ಬಾವಿಗೆ ಧುಮುಕ್ಕಿದ್ದಾರೆ. ಅದರೆ ಗಗನ್ ಗೆ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇನ್ನೂ ಇಬ್ಬರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿ ದೌಡಾಯಿಸಿ ಮೃತದೇಹವನ್ನ ಹೊರತೆಗೆದಿದ್ದಾರೆ, ಮುಗುಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ, ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Comments