ತೇರಿನ ಬೀದಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ,
ಈಶ್ವರ ದೇವಸ್ಥಾನದಲ್ಲಿ ಎರಡು ಬೆಳ್ಳಿ ಕಿರೀಟ, ಚಿನ್ನದ ತಾಳಿ ಕಳವು
ದೊಡ್ಡಬಳ್ಳಾಪುರ : ಕಳೆದ ರಾತ್ರಿ ತೇರಿನ ಬೀದಿಯಲ್ಲಿರುವ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳವು ಯತ್ನ ನಡೆದಿದ್ದು, ಪಕ್ಕದ ಈಶ್ವರ ದೇವಸ್ಥಾನದಲ್ಲಿ ಎರಡು ಬೆಳ್ಳಿ ಕಿರೀಟ, ಚಿನ್ನದ ತಾಳಿಯನ್ನ ಕಳ್ಳರು ಕದ್ದೊಯ್ದಿದ್ದಾರೆ.
ಚಿಕ್ಕಮಧುರೆ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವ; ಪಿಯುಸಿ ಪಾಸ್ ಮಾಡಪ್ಪ ಎಂದು ಬಾಳೆಹಣ್ಣನ್ನ ತೆರಿಗೆ ಅರ್ಪಣೆ ಮಾಡಿದ ವಿದ್ಯಾರ್ಥಿ....!!
ದೊಡ್ಡಬಳ್ಳಾಪುರ ನಗರದ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಯತ್ನ ಪ್ರಕರಣ ನಡೆದಿದೆ, ಹುಂಡಿ ಕಳವು ಮಾಡಲು ಯತ್ನಿಸಿದ್ದು, ಆದರೆ ಕಳ್ಳರಿಂದ ಹುಂಡಿ ಕಳವು ಮಾಡಲು ಸಾಧ್ಯವಾಗಿಲ್ಲ. ಆದರೆ ಪಕ್ಕದಲ್ಲಿರುವ ಈಶ್ವರ ದೇವಸ್ಥಾನದ ಬಾಗಿಲು ಹೊಡೆದು ಒಳ ನುಗ್ಗಿರುವ ಕಳ್ಳರು ಎರಡು ಬೆಳ್ಳಿ ಕಿರೀಟ ಮತ್ತು ಚಿನ್ನದ ತಾಳಿಯನ್ನ ದೋಚಿದ್ದಾರೆ.
ಸ್ಥಳಕ್ಕೆ ಮುಜರಾಯಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments