ಅಲೋಕ್ ವಿಶ್ವನಾಥ್ ಗೆ ಬಿಜೆಪಿ ಟಿಕೆಟ್ ಸಿಗಲಿ ಎಂದು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿದ ಅಲೋಕ್ ವಿಶ್ವನಾಥ್ ಅಭಿಮಾನಿಗಳು.
ಲೋಕಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇವೆ ಟಿಕೆಟ್ ಆಕಾಂಕ್ಷಿಗಳು, ಹೇಗಾದರೂ ಟಿಕೆಟ್ ಪಡೆಯಲು ಪಕ್ಷಗಳ ವರ್ಚಸ್ವಿ ನಾಯಕರ ಮನೆ ಸುತ್ತಾಟ ಇದಕ್ಕೆ ಭಿನ್ನವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿಮಾನಿಗಳು ಅಲೋಕ್ ವಿಶ್ವನಾಥ್ ಗೆ ಬಿಜೆಪಿ ಟಿಕೆಟ್ ಸಿಗಲಿ ಎಂದು ರಾಯರಿಗೆ ಪೂಜೆ ಸಲ್ಲಿಸಿದ್ದಾರೆ
ರಾಘವೇಂದ್ರ ಸ್ವಾಮಿಗೆ ಹರಕೆ ಹೊತ್ತು "ದೇಶಕ್ಕೆ ಮೋದಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಲೋಕ್ ವಿಶ್ವನಾಥ್" ಎಂಬ ಬರಹದ ಪೋಟೋ ಗೆ ಪೂಜೆ
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಮಗ ಅಲೋಕ್ ವಿಶ್ವನಾಥ್ ಪ್ರಧಾನಿ ಮೋದಿ ಚಿತ್ರಗಳಿರುವ ಫೋಟೋನ ರಾಯರ ಸನ್ನಿಧಿಯಲ್ಲಿರಿಸಿ ಅಲೋಕ್ ವಿಶ್ವನಾಥ್ ರ ಹೆಸರಿನಲ್ಲಿ ಪೂಜೆ ಸಲ್ಲಿಕೆ.
ಅಲೋಕ್ ವಿಶ್ವನಾಥ್ ಗೆ ಟಿಕೆಟ್ ಸಿಗಲಿ ಎಂದು ಬೆಂಗಳೂರಿಂದ ಮಂತ್ರಾಲಯ ಪ್ರಯಾಣ ರಾಯರ ದೇವಸ್ಥಾನದವರೆಗೂ 380 ಕಿ.ಮೀ ಪ್ರಯಾಣ ಮಾಡಿ ಪೂಜೆ ಸಲ್ಲಿಸಿದ್ದಾರೆ.
ಯಲಹಂಕ ವಾಸಿಗಳಾದ ಪ್ರವೀಣ್ ಕುಮಾರ್, ವೆಂಕಟರಮಣಪ್ಪ, ಕೃಷ್ಣ, ಹಿರೇಮಠ್, ವೆಂಕಟ್ ಬೆಳ್ಳಳ್ಳಿ, ಶ್ರೀನಿವಾಸ್, ಪ್ರಕಾಶ್ ರೆಡ್ಡಿ ಎಂಬುವವರಿಂದ ದೇವರಿಗೆ ಹರಕೆ - ಪೂಜೆ
Comments