ಬೆಂಗಳೂರಿನ ಯಲಹಂಕದ ಅಳ್ಳಾಳಸಂದ್ರ ಬಸ್ ನಿಲ್ದಾಣ ಸಮೀಪ ದೇಶ ವಿದೇಶಗಳ ಕಲಾವಿದರ ತಂಡದಿಂದ ಕೂಡಿದ ಜೆಮಿನಿ ಸರ್ಕಸ್ ಪ್ರದರ್ಶನ......!!



ಯಲಹಂಕ:

ಸರ್ಕಸ್ ನ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವುದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಾಸ್ ಮುಂಚೂಣಿಯಲ್ಲಿದೆ.




1951 ರಲ್ಲಿ ಎಂ.ವಿ. ಶಂಕರನ್ ಹಾಗೂ ಕೆ.ಸಹಾದೇವನ್ ರಿಂದ ಆರಂಭವಾದ ಜೆಮಿನಿ, ಸರ್ಕಾಸ್ ಇವರಗೂ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಸರ್ಕಸ್ ಕಲೆಯನ್ನು ಜೀವಂತವಾಗಿ ಉಳಿಸಿದೆ ಇಂದು ಎಂ.ವಿ.ಶಂಕರ್ ಅವರ ಮಕ್ಕಳಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್ ಜೈಮಿನಿ ಸರ್ಕಸ್ ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ.



ಬೆಂಗಳೂರು ನಾಗರಿಕರಿಗೆ ಶುದ್ಧ ಮನರಂಜನೆವ ನೀಡುವ ಉದ್ದೇಶದಿಂದ. ಯಲಹಂಕ ಅಳ್ಳಾಳಸಂದ್ರದಲ್ಲಿ ಜೇಮಿನಿ ಸರ್ಕಸ್ ಪ್ರದರ್ಶನ ಆರಂಭವಾಗಿ ಸರ್ಕಸ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.



ಯಲಹಂಕದ ಅಳ್ಳಾಳಸಂದ್ರ ಬಸ್ ನಿಲ್ದಾಣ ಸಮೀಪ ಪ್ರದರ್ಶನವಾಗಿತ್ತಿರುವ ಜೇಮಿನಿ ಸರ್ಕಸ್ ನಲ್ಲಿ ರಷ್ಯಾ, ತಾಂಜೇನಿಯಾ. ಇಥಿಯೋಪಿಯ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ ಕಲಾವಿದರು ವೈವಿಧ್ಯಮಯ ರೋಮಾಂಚನಕಾರಿ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.


ಜೇಮಿನಿ ಸರ್ಕಸ್ ನಲ್ಲಿ 300 ಮಂದಿ ಉದ್ಯೋಗಿಗಳಿದ್ದು ಅವರಲ್ಲಿ 40 ಮಂದಿ ಮಹಿಳಾ ಕಲಾವಿದರು ಹಾಗೂ 60 ಮಂದಿ ಪುರುಷ ಕಲಾವಿದರಿದ್ದಾರೆ.


Partners: Ajay Shankar, Ashok Shankar Media Co-ordinator: Shrihari Nair


Mob: 6352419244/7907442664/7222956490

Comments